ಕಂದಾಯ ಇಲಾಖೆ:- ನಿರ್ಗತಿಕ ವೃದ್ದರಿಗೆ ಮಾಸಿಕ ವೃದ್ದಾಪ್ಯ ವೇತನ ಶೇಕಡ 40 ರಷ್ಟು ಅಂಗ ನ್ಯೋನ್ಯತೆಯುಳ್ಳವರಿಗೆ ಮಾಸಿಕ ಅಂಗವೈಕಲ್ಯ ವೇತನ ನಿರ್ಗತಿಕ ವಿಧವೆಯರಿಗೆ ಮಾಸಿಕ ವಿಧುವಾ ವೇತನ ಮನಸ್ವಿನಿ ಯೋಜನೆಯಡಿ 40 ರಿಂದ 64 ವರ್ಷದೊಳಗಿನ ಸಂಕಷ್ಟದಲ್ಲಿರುವ ಅವಿವಾಹಿತ/ವಿಚ್ಚೇಧಿತ ಮಹಿಳೆಯರ ಆರ್ಥಿಕ ಭದ್ರತೆಗಾಗಿ ಮಾಸಾಶನ ನೀಡಲಾಗುತ್ತದೆ. ಸಿಡಿಲು, ನೆರೆಹಾವಳಿ, ಬರಗಾಲ, ಬೆಂಕಿ ಅನಾಹುತ, ಭೂಕಂಪ ಇತ್ಯಾದಿ ಪ್ರಕೃತಿ ವಿಕೋಪದಿಂದ ಮೃತ ಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪ್ರಕೃತಿ ವಿಕೋಪ ನಿಧಿಯಿಂದ ಸಹಾಯಧನ ಯೋಜನೆ. ಕೇಲಸ ಮಾಡುವ ಸಂಧರ್ಭದಲ್ಲಿ ಆಕಸ್ಮಿಕವಾಗಿ ವ್ಯಕ್ತಿ ಮೃತ ಪಟ್ಟರೆ ಅವರ ಕುಟುಂಬಕ್ಕೆÉ ರಾಷ್ಟ್ರೀಯ ಭದ್ರತ ಯೋಜನೆ ನಿಧಿಯಿಂದ ಸಹಾಯಧನ. ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಯು ಮೃತಪಟ್ಟರೆ ಶವ ಸಂಸ್ಕಾರಕ್ಕೆ ಮೃತನ ಕುಟುಂಬಕ್ಕೆ ಶವ ಸಂಸ್ಕಾರ ಭತ್ಯೆ ನೀಡಲಾಗುವುದು. ಹೆಚ್ಚಿನ ವಿವರಗಳಿಗಾಗಿ ಕಂದಾಯ ಇಲಾಖೆಯ ತಹಶೀಲ್ದಾರರ ಕಛೇರಿಯನ್ನು ಸಂಪರ್ಕಿಸುವುದು. ಆರೋಗ್ಯ ಇಲಾಖೆ:- ಆರೋಗ್ಯ ತಪಾಸಣಾ ಯೋಜನೆ ಅಡಿ ಉಚಿತ ಔಷಧಿ ಮತ್ತು ಚಿಕಿತ್ಸೆ ಹಾಗೂ ತುರ್ತು ಚಿಕಿತ್ಸೆಗಾಗಿ ರೋಗಿಗಳ ಪ್ರಯಾಣಕ್ಕೆ 108 ಆಂಬ್ಯುಲೆನ್ಸ್ ಸೇವೆÉ. ಜನನಿ ಸುರಕಾ ಯೋಜನೆ ಅಡಿ ಗರ್ಬೀಣಿ ತಪಾಸಣೆ, ಟಿ.ಟಿ ಚುಚುಮದ್ದು, ಕಬ್ಬಿಣಾಂಶ ಮಾತ್ರೆ. ಪ್ರಸೂತಿ ಆರೈಕೆ ಯೋಜನೆಯಡಿ ಪರಿಶಿಷ್ಟ ಜಾತಿಯ ಮಹಿಳೆಯರ ಪ್ರಸೂತಿ ಆರೈಕೆಗಾಗಿ 6 ರಿಂದ 9ನೇ ತಿಂಗಳ ಗರ್ಭವಸ್ಥೆ ಸುರಕ್ಷತೆಗಾಗಿ ರೂ. 1000/- ಮತ್ತು ಹೆರಿಗೆಯ ನಂತರ 48 ಗಂಟೆಯೊಳಗೆ ರೂ.1000/- ಸಹಾಯ ಧನ ನೀಡಲಾಗುವುದು. ಮಡಿಲು ಕಾರ್ಯಕ್ರಮ ಅಡಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಉಚಿತ ಹೆರಿಗೆ, ಬೇಬಿ ಕಿಟ್ ಮತ್ತು ಪ್ರೋತ್ಸಾಹ ಧನ ಸೌಲಭ್ಯ. ಕಿಶೋರಿ ಕಾರ್ಯಕ್ರಮದಲ್ಲಿ ಕಿಶೋರಿಯರಿಗೆ ಋತು ಚಕ್ರದ ಸಮಯದಲ್ಲಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ನೇಹ ಕ್ಲಿನಿಕ್ ವ್ಯವಸ್ಥೆ ಮತ್ತು ಸ್ಯಾನಿಟರಿ ನ್ಯಾಪ್ಕಿನ್ ನೀಡಲಾಗುವುದು. ಮೂಲ : ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ